ಮಹಾನಗರದ ಮರಗಳು ನಾವು
ಮೈ ಹರವಿ ನೆರಳಾಗುವೆವು
ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ
ಗಾಳಿ ಮಳೆಗೆ
ಆವ ಜನ್ಮದ ಪಾಪ
ತಟ್ಟಿಹುದೋ ಎಮಗೆ ?
ಎಲ್ಲರೂ ವೈರಿಗಳು
ಈ ಮಹಾನಗರದೊಳಗೆ
ವಸಂತಕ್ಕೆ ಮೈದಳೆದರೆ...
ಕೊಂಚ ಮೈ ಕೊಡವಿ ಚಿಗಿತರೆ
ಕೆ.ಇ.ಬಿ.ಯವರ ಕಟಾವು
ಕಿಂಚಿತ್ ಒಣಗಿದರೆ ಕೊಂಬೆ
ಪಾಲಿಕೆಯವರ ಕೊಡಲಿ
ನಾ ಹೇಗೆ ನೆರಳ ಕೊಡಲಿ ?
ರಸ್ತೆ ಅಗಲೀಕರಣ,
ಫುಟ್ಪಾತ್ ನವೀಕರಣ
ಏನಿಲ್ಲದಿದ್ದರೂ ಯೋಧರ ವನ
ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ
ಕತ್ತರಿಸಿದರೂ ರೆಂಬೆ ಕೊಂಬೆಗಳ
ಮತ್ತೆ ಚಿಗಿತು ಜೀವನದಲಿ
ಹೋರಾಡೆಂಬ ಪಾಠ ಸಾರುವೆವು
ಬಿಸಿಲಿಗೆ ಬೇಯುವ ಜನಕೆ
ಬಿಡದೆ ನೆರಳಾಗುವೆವು.
ಮೈ ಹರವಿ ನೆರಳಾಗುವೆವು
ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ
ಗಾಳಿ ಮಳೆಗೆ
ಆವ ಜನ್ಮದ ಪಾಪ
ತಟ್ಟಿಹುದೋ ಎಮಗೆ ?
ಎಲ್ಲರೂ ವೈರಿಗಳು
ಈ ಮಹಾನಗರದೊಳಗೆ
ವಸಂತಕ್ಕೆ ಮೈದಳೆದರೆ...
ಕೊಂಚ ಮೈ ಕೊಡವಿ ಚಿಗಿತರೆ
ಕೆ.ಇ.ಬಿ.ಯವರ ಕಟಾವು
ಕಿಂಚಿತ್ ಒಣಗಿದರೆ ಕೊಂಬೆ
ಪಾಲಿಕೆಯವರ ಕೊಡಲಿ
ನಾ ಹೇಗೆ ನೆರಳ ಕೊಡಲಿ ?
ರಸ್ತೆ ಅಗಲೀಕರಣ,
ಫುಟ್ಪಾತ್ ನವೀಕರಣ
ಏನಿಲ್ಲದಿದ್ದರೂ ಯೋಧರ ವನ
ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ
ಕತ್ತರಿಸಿದರೂ ರೆಂಬೆ ಕೊಂಬೆಗಳ
ಮತ್ತೆ ಚಿಗಿತು ಜೀವನದಲಿ
ಹೋರಾಡೆಂಬ ಪಾಠ ಸಾರುವೆವು
ಬಿಸಿಲಿಗೆ ಬೇಯುವ ಜನಕೆ
ಬಿಡದೆ ನೆರಳಾಗುವೆವು.